ನನಗೆ ಮದುವೆಯಾಗಿ ಮೂರು ತಿಂಗಳಾಗಿದೆ, ಬಿಟ್ಟುಬಿಡಿ. - ಆರೋಪಿ ನವೀನ್
ನಿನ್ನೆ ಮಹಜರು ಮುಗಿಸಿದ ಅಧಿಕಾರಿಗಳು ವಿಚಾರಣೆಗೆ ಮುಂದಾಗಿದ್ದಾರೆ. ಪೋಸ್ಟ್ ಹಾಕಿ, ನಾನು ಹಾಕಿಲ್ಲ ಎಂದಿದ್ದೀಯಾ.. ಅಲ್ಲದೇ ನಮ್ಮನ್ನ ದಿಕ್ಕು ತಪ್ಪಿಸುವ ನಾಟಕವಾಡಿದ್ದೀಯ ಯಾಕೆ ಎಂದು ಏರು ಧ್ವನಿಯಲ್ಲಿ ಅಧಿಕಾರಿಗಳು ಕೇಳಿದ್ದಾರಂತೆ.. ಈ ವೇಳೆ ತಪ್ಪಾಯ್ತು ಕ್ಷಮಿಸಿ.. ನನಗೆ ಮದುವೆಯಾಗಿ ಮೂರು ತಿಂಗಳಾಗಿದೆ ನನ್ನನ್ನ ಕಳಿಸಿಕೊಡಿ ಎಂದು ನವೀನ್ ಕೇಳಿಕೊಂಡಿದ್ದಾನಂತೆ.
ನೀನು ಹಾಕಿರುವ ಪೋಸ್ಟ್ನಿಂದ ಹೀಗೆಲ್ಲಾ ಆಗಿದೆ.. ನಿನ್ನ ಮನೆಯೂ ಕೂಡ ಸುಟ್ಟು ಹೋಗಿದೆ ಎಂದು ಹೇಳಿದ್ದಕ್ಕೆ ಮೌನವಾದ ನವೀನ್..
ತಪ್ಪಾಯ್ತು ಅಂತ ಹೇಳಿದ್ದಾನೆ ಎನ್ನಲಾಗಿದೆ. ಇದಾದ ಬಳಿಕ ಯಾವುದೇ ಪ್ರಶ್ನೆಗೂ ನವೀನ್ ಉತ್ತರ ನೀಡುತ್ತಿಲ್ಲ, ಮನೆ ಪರಿಸ್ಥಿತಿ ನೆನದು ಬೇಸರದಿಂದಿದ್ದಾನೆ ಎಂದು ನ್ಯೂಸ್ ಫಸ್ಟ್ಗೆ ತನಿಖಾ ತಂಡ ಮಾಹಿತಿ ನೀಡಿದೆ.
Bangalore Hot News
0 Comments
Please share your comment